H R Leelavathi

H R Leelavathi

Share

Smt. H.R.Leelavathi blessed with a mellifluous voice and immaculate diction, is the tallest figure i

22/06/2026

ಒಡೆಯ ನಿನ್ನಡಿಯೆಡೆಯ : ರಚನೆ - ಆನಂದಕಂದ
ಸಂಗೀತ ಸಂಯೋಜನೆ - ಪದ್ಮಚರಣ್
ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು ​
ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು ​
ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ ​
ಅಲುಗಾಡಿ ಮನವು ಉಯ್ಯಾತಿಯಾಡುವಂತಿಹೆನು|| ​

ಹಂಬಲಿಸಿ ನಿನ್ನ ಕರೆದಾಗ್ಲೆ ಬಳಸಿ ಜನ ​
ಇಂದು ಬಿಡದೆಯೆ ನಡುವೆ ತುಂಬಿ ನಿಲುವರು ಚೆನ್ನ ​
ನಿನ್ನಡಿಯ ಹುಡಿಗಾಗಿ ಬಾಯಬಿಡುತಿಹ ನಾನು ​
ಮನ್ನಾ ಹುಡಿಯನೆ ಹೊಂದಿ ಮನದಾಸೆಗುಂದುವೆನು||​

ನಿನ್ನ ಬಳಿಯಲಿ ಬೇಡಿಕೊಳುವೆನೊಂದೇ ಒಂದು ​
ನಿನ್ನೊಲುಮೆಗಣ್ಣಿಯಲಿ ಬಂಧಿಸೆನ್ನನು ಬಿಗಿದು ​
ಚೆನ್ನಾದ ದಾರಿಯೊಂದನ್ನು ತೋರಿಸಿ ನನ್ನ ​
ನಿನ್ನಡಿಗಳೆಡೆಯಲ್ಲಿ ಕರೆದುಕೊಳುವುದು ಚೆನ್ನ

22/06/2026

ಜತಿಯಾ ಮೊಲಾಯಾ : ರಚನೆ - ಪುರುಷೋತ್ತಮ್ ದಾಸ್
ಸಂಗೀತ ಸಂಯೋಜನೆ - ದೇಬೆನ್ ಶರ್ಮ
ಮೂಲಗಾಯನ - ಎಚ್.ಆರ್. ಲೀಲಾವತಿ
ಇದು ಶ್ರೀ ಪುರುಷೋತ್ತಮ್ ದಾಸ್ ಅವರು, ಲೀಲಾವತಿಯವರಿಗಾಗಿಯೇ 1968 ರಲ್ಲಿ ಹೊಸದಾಗಿ ರಚಿಸಿದ ಅಸ್ಸಾಮೀ ಗೀತೆ.

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ಜೊತಿಯಾ ಮೊಲಾಯಾ ಬೋಲೆ
ತುಮಾಲೋಯ್ ಮೊನೋತ್ ಪೊಡೆ
ಬಿನೊಂದಿಯಾ ರೂಪ್ ಮನೋಹರ್
ನೀಲಾ ಕೋಯ್ ಪೊಹಾರೊತೆ
ಓ ಜೀಕ್ ಮೀಕ್ ರೋದಾಲಿಯೆ
ಸೊತಿಯಾಯ್ ರೂಪಾಲಿ ಪೊಹೊರ್

ಕುಲುಕುಲು ನಿಝೋರಾರ್
ಮೋ ಭೋರಗಾನ್
ಪೊಹಾರೆ ಭೊಯಾಮೆ ಉಠೆ
ಮೃದು ಐಕೋಗಾನ್
ಮೊರುಸ್ಥಲಿ ಮೀಠಾದೀ ಥೋಕರ್ ॥

ತುಮಾರ್ ಸೊರೊಣ ಧುವಾ
ಲೂಯಿ ತೊರೆ ಪಾನಿ
ಬಿಪೊದೆ ಅಪೊದೆ ತಾರೆ
ಕಾಮಾಖ್ಯಾ ಗೋಹಾನಿ
ರಿಬ್ ರಿಬ್ ಮೊಲೊಯಾಯ್
ಜೇನ್ ಥಾಕೆ ಖಾಯ್
ಮಾಠೀರ್ ಮೊರೊಮ್ ಖಿನೀ
ಸೀರಾ ಮೊಧುಮೋಯ್
ಭಾರತೋರ್ ಪೂಬಾಲೀ ಪ್ರಾಂತೋರ್॥

17/06/2026

ನೀನೇ ಅನಾದಿ ನಾನೇನು ಬೇಡಲಿ : ರಚನೆ - ಶಿಶುನಾಳ ಶರೀಫ್
ಸಂಗೀತ ಸಂಯೋಜನೆ ಮತ್ತು ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ನೀನೇ ಅನಾದಿ ನಾನೇನು ಬೇಡಲಿ
ಶಂಭೂ ಲಿಂಗ ಶಂಭೂ ಲಿಂಗ

ಮಾನವ ಜಲ್ಮಕ್ಕೆ ಬಂದು
ಏನೇನು ತಿಳಿಯಲಿಲ್ಲ ||ಶಂಭೂ ಲಿಂಗ ||

ಹಾವು ಹರಿದಾಡಿತು
ಚೇಳು ಕುಣಿದಾಡಿತು || ಶಂಭೂ ಲಿಂಗ ||

ಹಾವು ಚೇಳನು ನುಂಗೆ
ಕೋಳಿಯು ಕೂಗುವದು ||ಶಂಭೂ ಲಿಂಗ ||

ಪಕ್ಕವಿಲ್ಲದ ಪಕ್ಷಿ
ಗಗನದೊಳಾಡಿತು ||ಶಂಭೂ ಲಿಂಗ ||

ಅಕ್ಕರದಲಿ ಶಿವ
ನೋಡಿತಾ ನಗುತಿಹನು ||ಶಂಭೂ ಲಿಂಗ ||

ಮಾಯೆಯೆಂಬುದು ಮನೆ
ಮಾಡಿತು ದೇಹದೊಳು ||ಶಂಭೂ ಲಿಂಗ ||

ಮಾಯೆ ಇನ್ನಾವ ಕಾಲಕ್ಕೆ
ಪರಿಹಾರವಹುದು || ಶಂಭೂ ಲಿಂಗ ||

ಹರಿಸಿ ದೇವತೆಗಳಿಗೆ
ಬ್ರಹ್ಮನ ಕಾವಲು ||ಶಂಭೂ ಲಿಂಗ ||

ಗುರುಮಂತ್ರ ಬಲದಿಂದ
ಈ ಭಾವ ನೀಗುವುದು ||ಶಂಭೂ ಲಿಂಗ ||

ಕಲ್ಲ ದೇವರು ಕಣ್ಣು
ಮುಚ್ಚಿ ಕಾಪಾಡಿದವು ||ಶಂಭೂ ಲಿಂಗ ||

ಬಲ್ಲಿದ ಶಿಶುನಾಳಧೀಶನ
ದಯೆಯಿಂದ ||ಶಂಭೂ ಲಿಂಗ ||

13/06/2026

ನಾದ ಸುಖಕರ : ರಚನೆ - ರಾಘವೇಂದ್ರ ಇಟಗಿ
ಸಂಗೀತ ಸಂಯೋಜನೆ - ಪದ್ಮಚರಣ್
ಮೂಲಗಾಯನ - ಎಚ್ ಆರ್ ಲೀಲಾವತಿ

ತಪ್ಪದೆ ಈ ಇಂಪಾದ ಹಾಡನ್ನು ಕೇಳಿ !

ನಾದ ಸುಖಕರ ಪ್ರಿಯ ಸಖ ​
ನುಡಿಸು ವೀಣೆಯ ವೈಣಿಕ ​

ನೋವು ನರಳಿಕೆ ಕೊರಳ ಗಂಟೆಗೆ ​
ಜೀವ ಕೋಟಿಯು ಬೆದರಿದೆ. ​
ನೇಹ ತುಂಬಿದ ನಾದ ಮಂಜುಳ
ಸ್ನೇಹ ಧಾರೆಗೆ ಚದುರಿದ ​
ಪ್ರಾಣ ಶಕ್ತಿಗಳೆಲ್ಲ ಮರಳಲಿ ​
ದಿವ್ಯ ಚೇತನ ದಾಯಕ||_||​

ಕಂಸ ಭೀತಿಯ ಕ್ರೂರ ಚೆರೈಗೆ ​
ಹಿಂಸೆ ಬಡುತಿಹ ಮನುಜನ
ಹೂವ ಹಂಬಲು ಕಮರಿ ಹೋಗಿದೆ ​
ಬಣ್ಣಗೆಟ್ಟಿದೆ ಮಧುವನ ​
ಖುಷಿಯ ಚಿಂತನ ನಿನ್ನ ಗಾಯನ
ಪ್ರಾಣ ತುಂಬಲಿ ವೈಣಿಕ ||_||​

ಕಾಂತಿ ಹೀರಕ ಕರಗಿ ಹರಿಯಿತು
ಗಾನ ವಾಹಿನಿಯಾಗುತ
ಶಾಂತಿದಾಯಕ ಸೂರ್ಯ ಸಂಗಕೆ
ಪ್ರಾಣ ಪ್ರೇಮಿಯು ಬಾಗುತ
ನಂಬಿ ನಿಂತಿರೆ ಗಾನ ಬಂಧುವೆ
ತುಂಬು ನಾದೋನ್ಮಾದಕ ||_||​

Want your public figure to be the top-listed Public Figure in Mysore?
Click here to claim your Sponsored Listing.

Category

Address


Mysore